Sunday, November 16, 2008

'ಎ ವೆಡ್ನೆಸ್ಡೇ'

'ಆಪ್ ಕಾ ಘರ್ ಮೆ ಕಾಕ್ರೋಚ್ ಆಯೆ ತೊ ಆಪ್ ಕ್ಯಾ ಕರ್ತೇ ಹೇ.'
'ಐಯಾಮ್ ದ ಸ್ಟುಪಿಡ್ ಕಾಮನ್ ಮ್ಯಾನ್. ಒನ್ ಥಿಂಗ್ ಟು ಕ್ಲೀನ್ ಹಿಸ್ ಹೌಸ್'
'ಆನ್ ಎ ಫ್ರೈಡೇ ರಿಪೀಟೆಡ್ ಇಟ್ ಆನ್ ಥಸರ್್ಡೇ ಐಯಾಮ್ ರಿಪ್ಲೈಯಿಂಗ್ ಆನ್ ವೆಡ್ನೆಸ್ಡೇ'

ಹೌದು ನಾವೆಲ್ಲ ಸ್ಟುಪಿಡ್ ಕಾಮನ್ ಮ್ಯಾನ್ಗಳು ಅದರಲ್ಲಿ ಯಾವುದೇ ಸಂದೇಹವಿಲ್ಲ. ಕ್ಷಣ ಕ್ಷಣಕ್ಕೂ ಹೆದರಿಕೊಂಡು ಜೀವನ ಸಾಗಿಸೋ ಪುಕ್ಕಲರು. ಮನೆಯಿಂದ ಕಾಲು ಹೊರಗಡೆ ಇಡೋದಕ್ಕು ಹಲವು ಬಾರಿ ಚಿಂತಿಸೋರು. ಹೊರಗಡೆ ಹೋದ ಗಂಡ ಅಥವಾ ಮಕ್ಕಳು ಸರಿಯಾದ ಸಮಯಕ್ಕೆ ಬರದಿದ್ದರೆ ಏನಾಯಿತೋ ಎಂದು ಹೆದರಿ ಮೊಬೈಲ್ ಫೋನ್ಗೆ ಕಾಲ್ ಮಾಡೋರು. ಆಫೀಸಲ್ಲಿ ಕೂತು ಮನೇಲಿರೋ ಹೆಂಡತಿ, ಶಾಲೆಗೆ ಹೋದ ಮಗನ ಬಗ್ಗೆ ಚಿಂತೆ ಮಾಡೋ ಹೇಡಿಗಳು.
ಖಂಡಿತಾ ನಾವೀಗ ಪ್ರತಿಯೊಂದು ಕ್ಷಣಕ್ಕೂ ಹೆದರಿಕೊಂಡು ಜೀವನ ಮಾಡಬೇಕಾದ ಸ್ಥಿತಿ ನಿಮರ್ಾಣವಾಗಿದೆ. ಅದಕ್ಕೆ ಮುಖ್ಯ ಕಾರಣ ದೇಶದ್ರೋಹಿಗಳು. ಜಾತಿ ಮತದ ಹೆಸರಲ್ಲಿ ಇವರು ಹುಟ್ಟಿ ಹಾಕ್ತಾ ಇರೋ ಭಯೋತ್ಪಾದನೆಯಿಂದಾಗಿ ಸಾಮಾನ್ಯ ಮನುಷ್ಯನ ಜೀವನ ದುಸ್ತರವಾಗಿದೆ. ಆದರೆ ಅದೇ ಸಾಮಾನ್ಯ ಮನುಷ್ಯ ಸಿಡಿದೆದ್ದು ನಿಂತರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು 'ಎ ವೆಡ್ನೆಸ್ಡೇ' ಯಲ್ಲಿ ನೀರಜ್ ಪಾಂಡೆ ಅದ್ಭುತವಾಗಿ ಚಿತ್ರಿಸಿದ್ದಾರೆ. ಚಿತ್ರಕ್ಕೆ ತಕ್ಕಂತೆ ಸಾಮಾನ್ಯ ಮನುಷ್ಯನಾಗಿ ನಾಸಿರುದ್ದೀನ್ ಷಾ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಚಿತ್ರ ಕೊನೆಯವರೆಗೂ ಸಸ್ಪೆನ್ಸ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ ಅದರಲ್ಲಿ ನಿದರ್ೇಶಕರ ಶ್ರಮ ಎದ್ದು ಕಾಣುತ್ತದೆ. ಸಂಭಾಷಣೆ ಎಂತಹವನನ್ನೂ ಬಡಿದೆಬ್ಬಿಸುತ್ತದೆ. ನಾಸಿರುದ್ದೀನ್ ಷಾ ಡೈಲಾಗ್ ಡೆಲಿವರಿ, ಆ ಡೈಲಾಗ್ನ ಗಂಭೀರತೆಯನ್ನು ಇಮ್ಮಡಿಗೊಳಿಸುತ್ತದೆ. ಪ್ರತಿಯೊಬ್ಬರೂ ನೋಡಲೇ ಬೇಕಾದ ಚಿತ್ರ.
ಗೆಳೆಯರೆ ನೀವೂ ಒಮ್ಮೆ ಈ ಚಿತ್ರ ನೋಡಿ ಆಮೆಲೆ ನಿಮ್ಮ ಅಭಿಪ್ರಯಾಯ ತಿಳಿಸಿ.
ಧನ್ಯವಾದಗಳು.

Friday, November 14, 2008

ಹಳ್ಳಿ ಹುಡುಗ ಬೆಂಗ್ಳೂರಲ್ಲಿ
ಕಾಲೇಜು ಮುಗಿಸಿ ಬೆಂಗಳೂರಿಗೆ ಬಂದು ತಿಂಗಳಾನುಗಟ್ಟಲೆ ಆಯ್ತು. ಜರ್ನಲಿಸಂ ಫೀಲ್ಡ್ನಲ್ಲಿ ಉದ್ಯೋಗವೂ ದೊರಕಿತು. ಆದರೂ ಇದುವರೆಗೆ ಒಂದು ಸ್ವಂತ ಅಕ್ಷರ ಬರೆಯಲಾಗಲಿಲ್ಲ ಎಂಬ ಕೊರಗು ಶುರುವಾಗಿದೆ.ಕಾಲೇಜಲ್ಲಿದ್ದಾಗ ಅಲ್ಪ ಸ್ವಲ್ಪ ಬರೀತಿದ್ದೋನು ಬೆಂಗಳೂರೆಂಬ 'ಮಹಾನಗರಿಗೆ' ಬಂದ ನಂತರವಂತೂ ಅಕ್ಷರ ಲೋಕ ಇಲ್ಲಿ ಬರೀ ಕನಸೇ ಎಂಬ ಅನುಮಾನ ಉಂಟಾಗುತ್ತಿದೆ. ಆಫೀಸಲ್ಲಿ ಕೊಟ್ಟ ಅಸೈನ್ಮೆಂಟ್ನ್ನಷ್ಟನ್ನೇ ಮಾಡಿದ್ದು ಬಿಟ್ಟರೆ ಬೇರೇನೂ ಮಾಡ್ಲಿಲ್ವ ಎಂದು ಫೀಲ್ ಆಗ್ತಾ ಇದೆ.ಗೆಳೆಯರೆ ಇನ್ನು ಹಾಗಾಗೋದಕ್ಕೆ ನೀವು ಬಿಡಬಾರದು ನನ್ನನ್ನ ಅಕ್ಷರಲೋಕದಲ್ಲಿ ಮುಳುಗಿಸೋದಕ್ಕೆ ಪ್ರೇರೇಪಣೆ ನೀಡಬೇಕು. ಪಟ್ಟು ಹಿಡೀಬೇಕು, ಪ್ರೀತಿಯಿಂದ ಬೈಯಬೇಕು, ಎಲ್ಲಾ ಅಪ್ಡೇಟ್ಸ್ನ್ನೂ ಕೂಡ ನೋಡಿ ಪ್ರತಿಕ್ರಿಯೆ ಕಳುಹಿಸಬೇಕು ಇದನ್ನ ತಪ್ಪದೇ ಖಂಡಿತಾ ಮಾಡ್ತೀರಲ್ಲ.
ಇಂತೀ ನಿಮ್ಮ...

Monday, April 21, 2008

ಗೆಳೆಯನ ಮನೆ ಆತಿಥ್ಯ


ಕಡಿಗೆ ತಮ್ಮಾ ಹೇಂಗಿದ್ದೆ ಆರಾಮವಾ? 'ಹಾ ಆರಾಮ್'. ಬರ್ತಾ ದಾರಿ ಮಧ್ಯೆ ಏನಾದ್ರೂ ತ್ರಾಸಾತು? 'ಇಲ್ಲ'. ಅಷ್ಟು ದೂರದಿಂದ್ ಪ್ರಯಾಣ ಮಾಡ್ ಬಂದು ಸುಸ್ತಾಗಿರ್ಬೇಕು, ಹೋಗ್ ರೆಸ್ಟ್ ತಗೊಳ್ಳಿ. 'ಇಲ್ಲ, ಇಲ್ಲ, ಬೇಡ'.
ಕನ್ಫ್ಯೂಸ್ ಆಗ್ಬೇಡಿ. ಮೊನ್ನೆ ಗೆಳೆಯ ರಾಜೀವ್ ಹೆಗಡೆ ಮನೆಗೆ ಹೋಗಿದ್ದೆ ಆಲ್ಲಿನ ಕೆಲವು ಸಂಭಾಷಣೆಗಳಿವು. ಅದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಒಂದು ಪುಟ್ಟ ಹಳ್ಳಿ. ಆ ಹಳ್ಳಿಯ ಹೆಸರು ಕೆಳಗಿನಸಸಿ. ಅಲ್ಲಿ ಗೊದ್ಲಮನೆ ಎಂಬುದು ಗೆಳೆಯನ ಮನೆ ಹೆಸರು. ದಕ್ಷಿಣಕನ್ನಡ ಉಜಿರೆಯಿಂದ ರಾತ್ರಿ ಸುಮಾರು 10 ಗಂಟೆಗೆ ಶಿವಮೊಗ್ಗ ಬಸ್ಸು ಹತ್ತಿ ಕುಳಿತಿದ್ದೇವೆ. ಚಾರ್ಮಾಡಿ ಘಾಟಿಯೊಂದು ಶಿವಮೊಗ್ಗದವರೆಗೂ ಕಾಡಿದ್ದು! ಬಿಟ್ಟರೆ ಬೇರೇನೂ ತೊಂದರೆ ಕಾಣಿಸಲಿಲ್ಲ. ಸುಮಾರು 4 ಗಂಟೆ ಹೊತ್ತಿಗೆ ಶಿವಮೊಗ್ಗದಲ್ಲಿ ಇಳಿದಾಗಲೇ ಸರಿಯಾಗಿ ಎಚ್ಚರವಾಗಿದ್ದು. ಅಲ್ಲಿ 1 ಗಂಟೆ ಸಿದ್ದಾಪುರ ಬಸ್ಸಿಗಾಗಿ ಕಾದು ಕಾದು ಸುಸ್ತೋ ಸುಸ್ತು, ಶಿವಮೊಗ್ಗ ಬಸ್ಸು ನಿಲ್ದಾಣದಲ್ಲಿ ನಿಂತು ಅತ್ತಿಂದಿತ್ತ ನೋಡುತ್ತಿದ್ದ ನನ್ನ ಕಣ್ಣುಗಳಿಗೆ ಕಾಣಿಸಿದ್ದು ಆ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಮಲಗಿ ನಿದ್ರಿಸುತ್ತಿದ್ದ ಜನ. ಬೆಳಗಿನಜಾವದ ಸಮಯ ಸುಮಾರು 4.50 ಇದ್ದಿರಬಹುದು, ಬೆಳಗಿನ್ಜಾವದ ಸಿಹಿ ನಿದ್ರೆಯಲ್ಲಿ ಸಿಹಿಗನಸು ಕಾಣುತ್ತಾ ಮಲಗಿದ ಆ ಜನರನ್ನು ಪೋಲೀಸ್ ಪೇದೆಯೊಬ್ಬ ತನ್ನ ಉದ್ದನೆಯ ಲಾಠಿಯಿಂದ ಮೆತ್ತಗೆ ಏಟೊಂದನ್ನು ಬಿಗಿಯುತ್ತಾ ಎಚ್ಚರಗೊಳಿಸುತ್ತಿದ್ದ. ಬಹುಶಃ ಅಲ್ಲಿ ಮಲಗಿದಂತಹ ಜನಕ್ಕೆ ಅದುವೇ ಬೆಳಗಿನಜಾವದ ಸುಪ್ರಭಾತವೇನೋ!. ಅದೋ ಸಿದ್ದಾಪುರ ಬಸ್ಸು ಬಂತು ಹೋಗೋಣ ಬಾ ಅಂದಾಗ ಅದ್ಯಾವುದೋ ಯೋಚನಾ ಲಹರಿಯಲ್ಲಿದ್ದ ನನಗೆ ಕೂಡಲೇ ಏಚ್ಚರವಾಯ್ತು.

ಸಿದ್ದಾಪುರ ಎಂಟ್ರಿ
ಸಿದ್ದಾಪುರ ಪೇಟೆ ಹೊಕ್ಕಿದ್ದೇ ತಡ ಹಸಿರು ತೋರಣಗಳು ಹಸಿರು ಧ್ವಜಗಳು ನನ್ನನ್ನ ಸ್ವಾಗತಿಸಿದವು. ಅತ್ತ ಘಾಟಿಯೂ ಅಲ್ಲದ ಇತ್ತ ಬಯಲು ಪ್ರದೇಶವೂ ಅಲ್ಲದ ಉತ್ತರಕನ್ನಡ ಸಿದ್ದಾಪುರದ ಮಣ್ಣನ್ನು ಮೆಟ್ಟಿದ್ದೇ ಮೆಟ್ಟಿದ್ದು ಮೈಯಲ್ಲೇನೋ ಒಂಥರಾ ಹೊಸತನದ ಪುಳಕ. ಅಲ್ಲಿನ ಬಸ್ಸು ನಿಲ್ದಾಣವೇನೋ ಚೆನ್ನಾಗೇ ಇತ್ತು, ಆದರೆ ಬಸ್ಸುಗಳಲ್ಲ. ಬಹುಶಃ ಆ ಬಸ್ಸುಗಳು ಕರ್ನಾಟಕದಾದ್ಯಂತ ಉಪಯೋಗಗೊಂಡು, ಇನ್ನೇನು ತೀರಾ ಹದಗೆಟ್ಟು ಉಪಯೋಗಕ್ಕೂ ಬಾರದ ಸ್ಥಿತಿಯಲ್ಲಿನ ಎಲ್ಲಾ ಬಸ್ಸುಗಳನ್ನೂ ಅಲ್ಲಿನ ಹಳ್ಳಿಗಳಿಗೆ ಬಿಟ್ಟಿದ್ದಾರೇನೋ ಎಂದೆನಿಸಿದರೆ ಅದಕ್ಕೆ ಆಶ್ಚರ್ಯಪಡಬೇಕಿಲ್ಲ!

ಊರ ಹೆಸರುಗಳೇ ಒಂಥರಾ ಥ್ರಿಲ್
ದಾನಮಾಂವ, ಮೆಣಸಿ, ಮಾವಿನಗುಂಡಿ, ಹೆಗಡೆಕಟ್ಟಾ, ಹಾರ್ಸಿಕಟ್ಟಾ, ಸಂಪಖಂಡ, ಬೆಳ್ಳೆಮಡಕೆ, ಬೇಡ್ಕಣಿ, ಹೊನ್ನೆಘಟಗಿ, ಲಂಬಾಪುರ, ವಂದಾನೆ, ಗೊದ್ಲಮನೆ, ಜಟಗಿನಮನೆ, ದೊಡ್ಮನೆ, ಕಾನ್ಮನೆ, ಕಲಕೈ, ಜಗಳೆಮನೆ, ಕ್ಯಾದಗಿ, ಹೀಗೇ ಮೊದಲಾದ ಊರುಗಳ ಆ ಹೆಸರುಗಳಲ್ಲಿ ಏನೇನು ಅರ್ಥಗಳನ್ನಿಟ್ಟುಕೊಂಡಿದೆಯೋ ಏನೋ. ಅವುಗಳ ಅರ್ಥಗಳನ್ನು ಹುಡುಕುತ್ತಾ ಹೋದಲ್ಲಿ ಹಲವು ರೋಚಕ ಕಥೆಗಳಂತೂ ನಮ್ಮನ್ನು ಬಿಡದಂತೆ ಕಾಡುವುದಂತೂ ಸತ್ಯ. ಮತ್ತೊಂದು ಹೆಸರು ಬಂಕೇಶ್ವರ ದೇವಸ್ಥಾನ. ನನಗೆ ಈ ಹೆಸರು ಬಹಳವಾಗಿ ಕಾಡಿದ್ದು ಏಕೆಂದರೆ ಅದೇ ಹೆಸರಿನ ಶಾಲೆಯೂ ಅಲ್ಲಿದೆ. ಮನಸ್ಸಿನಲ್ಲಿದ್ದ ಯೋಚನೆಯೆಂದರೆ ಈ ಶಾಲೆಯಲ್ಲಿನ ವಿದ್ಯಾರ್ಥಿಗಳು ಬಂಕ್ ಹೊಡೆಯುತ್ತಾರೋ ಇಲ್ಲವೋ ಎಂದು.

ಅಂತೂ ಇಂತು ಮನೆ ಬಂತು
ಅಂತೂ ಗೆಳೆಯನ ಮನೆ ತಲುಪಿದ್ದಾಯಿತು. ಅಲ್ಲಿ ನಿಜಕ್ಕೂ ಆಶ್ಚರ್ಯವೆನಿಸಿದ ಸಂಗತಿಯೆಂದರೆ ಅಲ್ಲಿನವರ ಆತ್ಮೀಯತೆ ಮತ್ತು ಅತಿಥಿ ಸತ್ಕಾರ ಅದೆಲ್ಲಾ ಒಂಥರಾ ಗ್ರೇಟ್. ಮತ್ತೊಂದು ವಿಷಯ ಅಲ್ಲಿ ಕಂಡಂತದ್ದು ಅಲ್ಲಿನವರ ಸಂಸ್ಕೃತಿ, ಆ ಹಳ್ಳಿಗಳಲ್ಲಿ ಸಂಸ್ಕೃತಿ ಇನ್ನೂ ಉಳಿದುಕೊಂಡಿದೆ. ದೇಶದಲ್ಲೆಲ್ಲಾ ಜಾಗತೀಕರಣದ ಅಲೆಯಿದ್ದರೂ ತಮ್ಮ ಮೂಲ ಸಂಸ್ಕೃತಿಯನ್ನು ಅವರು ಬಿಟ್ಟಿಲ್ಲ.
ಇನ್ನುಳಿದಂತೆ ಅಲ್ಲಿ ಇಲ್ಲಿ ತಿರುಗಾಟ
ಹುಟ್ಟಿದ್ಮೇಲೆ ಸಾಯೋದ್ರೊಳಗೆ ನೋಡು ಒಮ್ಮೆ ಜೋಗ ಗುಂಡಿ, ಹೇಗಿದ್ರೂ ಗೆಳೆಯನ ಮನೆ ತನಕ ಬಂದಾಗಿದೆ. ಅಲ್ಲಿಂದ ಸುಮಾರು 20 ಕಿ.ಮೀ ಕ್ರಮಿಸಿದಲ್ಲಿ ವಿಶ್ವವಿಖ್ಯಾತ ಜೋಗ್ ಫಾಲ್ಸ್ ಸಿಗುತ್ತೆ ಆದ್ರಿಂದ ಅಲ್ಲಿಗೂ ಹೋಗಿ ಬಂದಿದ್ದಾಯಿತು ಆದರೆ ಒಂದು ಬೇಸರದ ಸಂಗತಿಯೆಂದರೆ ಫಾಲ್ಸ್ನಲ್ಲಿ ನೀರೇ ಇರಲಿಲ್ಲ ಎಂಬುದು. ಸರಿ ಬಿಡಿ ಜೋಗದ ಗುಂಡಿಗಾದರೂ ಹೋಗೋಣವೆಂದರೆ ಅಲ್ಲಿನ ಅಭಿವೃದ್ಧಿ ಕಾರ್ಯದ ನೆಪದಿಂದಾಗಿ ಅಲ್ಲಿಗೆ ಪ್ರವೇಶ ನಿಷೇಧಿಸಲಾಗಿತ್ತು. ನಂತರ ಇನ್ನೊಂದು ದಿನ ಯಾಣಕ್ಕೆ ಹೋಗಿದ್ದಾಯಿತು ಆದರೆ ಅಲ್ಲೂ ಅಭಿವೃದ್ಧಿ ಕಾರ್ಯದ ನೆಪದಿಂದಾಗಿ ಯಾಣದಲ್ಲಿನ ಚೂಪು ಚೂಪಾದ ಬೃಹತ್ ಸರಿಯಾಗಿ ಬಂಡೆಗಳನ್ನು ನೋಡಲಾಗಲಿಲ್ಲ.
ಏನೇ ಆದರೂ ಗೆಳೆಯನ ಮನೆಯ ಭರ್ಜರಿ ಆತಿಥ್ಯವನ್ನಂತೂ ಮರೆಯಲು ಸಾಧ್ಯವೇ ಇಲ್ಲ. ಹೇಯ್ ಗೆಳೆಯ ನಿಮ್ಮ ಮನೆಯಲ್ಲಿ ಸವಿಯೂಟವ ಉಣಿಸಿ ಸಿಹಿನೆನಪುಗಳ ಜೋಳಿಗೆಯನ್ನು ಕಟ್ಟಿಕೊಟ್ಟಿದ್ದಕ್ಕೆ ಧನ್ಯವಾದಗಳು. ಇನ್ನು ನಮ್ಮ ಮನೆಗೆ ಬರೋದು ನಿಮ್ಮ ಸರದಿ. ಖಂಡಿತಾ ಬರಲೇ ಬೇಕು.

Friday, March 7, 2008

ಹಸಿದಿಹ ಹೊಟ್ಟೆಯ ತಿರುವು.


ಬಡವನ ಹೊಟ್ಟೆಯ ಚುರುಗುಟ್ಟುವಿಕೆಗೆ
ಸಿಡಿಲ ಆರ್ಭಟವು ಕೇಳಿಸದಾಯಿತು
ರಣಹದ್ದು ವಾರದೀಚೆ ಬೇಟೆಯ ಕಾಯುತ್ತಿರಲು
ಹಸಿದ ಹುಲಿಯು ಹೇಲ ತಿನ್ನುವಷ್ಟು ಬರ,

ಉಳಿದದ್ದು ನರಿ ತೋಳದ ಪಾಲು
ಇದ ಕಂಡವನ ಹೊಟ್ಟೆ ಹುಳದ ಆರ್ತನಾದ ಮುಗಿಲು ಮುಟ್ಟಿತು.
ಹಸಿವ ಸಹಿಸದೆ, ಕಾಲಕೀವಿನ ರಸವನೆ ಹೀರಿದ,
ಹೊಟ್ಟೆ ಹುಳಕೆ ಸಂತೃಪ್ತಿ
ಬಡಜೀವಕೆ ಇನ್ನೆಲ್ಲಿಯ ತೃಪ್ತಿ

ಜಾಗತೀಕರಣದ ಬೇಗೆ ಬಡವನಿಗೆ
ಗರ್ಭಿಣಿಯ ಪ್ರಸವದ ಹಾಗೆ
ಬೇನೆಯೂ ತಾಳಲಾರ
ತಾಳದೆಯೂ ವಿಧಿಯಿಲ್ಲ

ಹಸಿದಿಹ ಹೊಟ್ಟೆಗೆ ಶ್ರೀಮಂತನ
ಕುಂಡಿಯ ತೊಳೆದ ನೀರನು ಕುಡಿಸುವ
ಅವನಿಗೆಲ್ಲಿದೆ ಮಾನವೀಯತೆ ಅಮಾನವೀಯ ಅವ ದೇವ
ಹಸಿದವನ ಕಷ್ಟವ ತಿಳಿಯದೆ
ಶ್ರೀಮಂತನ ಮಲದಲ್ಲೆಲ್ಲೋ ಲೀನವಾದ!

Monday, March 3, 2008

ಮೌನ, ಮಾತಿನ ಪ್ರೀತಿಯ ತಿರುವು.


ಮೌನ, ಮಾತಿಗೆ, ಪ್ರೀತಿ ಚಿಗುರಿದೆ,
ಸರಸದೊಡನೆ ವಿರಸವಾಗಿದೆ, ಈಗ
ಮಾತು ಮಾತಿನಾ ನಡುವೆ
ಮೌನ ಮೌನದಾ ಒಳಗೆ
ಒಳಗೊಳಗೆ ಎಳೆ ಜಗಳ
ಮೌನಕ್ಕೆ, ಹುಸಿಕೋಪ, ಮಾತಿಗೆ ಒಣಜಂಭ

ಮೌನ ಮಾತಾಡಿತು, ಮಾತು ಮೂಕವಾಯಿತು,
ಮೂಕ ಮಾತಿನ ತಿಳಿಯಿತು ಮೌನ.
ಮೌನ ಮಾತಿನ ನಡುವೆ ಒಂದು ರಣರಂಗ
ಮೌನದ ಗದ್ದಲಕ್ಕೆ! ಕಳಚಿತು ಪ್ರೀತಿಯ ಬೆಸುಗೆ

ಆ ಪ್ರೀತಿ ಸಮಾಧಿ ಮುಂದೆ
ಕಣ್ಣೀರ ಸುರಿಸಿ ಕಣ್ಣುಗಳೆ ಬತ್ತಿ ಹೋದಾಗ
ಕುರುಡಾಯಿತು ಕಣ್ಣು, ಮೌನದ ಭಾವನೆಗಳು ಸತ್ತು ಹೋಯಿತು
ಅಂತರಾಳವು ತಿಳಿಯಿತು
ಮಧುರ,ಮೌನ ಮಾತಿನ ಪ್ರೀತಿಯ.

ಅಮರವಾಯಿತು ಪ್ರೀತಿ, ಭಾವನೆಗಳ
ನಕ್ಷತ್ರ ಚಿತ್ತಾರದಲಿ,
ಮಾತು ಮಾತಾಡಿತು, ಮೌನ ಮಾತಾಡಿತು,
ಮೌನ, ಮಾತು, ಪ್ರೀತಿಗೆ ಶರಣಾಯಿತು.

Tuesday, February 26, 2008

ಮೌನ ಮಿತ್ರನ ತಿರುವು.


ಬದುಕು ಕನಸು
ಬಣ್ಣವಿಲ್ಲದ ಚಿತ್ರ


ಕಗ್ಗತ್ತಲೆಯ ಕಾಡ
ಚುಂಬನ


ತಿಳಿಯದು
ಮನಕೆ


ಪ್ರೇಮದಾ ಝೇಂಕಾರದಿ
ಮೈಮರೆತು


ಅಂಜಿದೆನು ಚಿಟ್ಟೆಯ
ರೆಕ್ಕೆ ಗಾಳಿಗೆ


ಅದೋ ಪ್ರಾಣಪಕ್ಷಿಯ
ಸ್ವಚ್ಛಂದ ವಿಹಾರ


ಮೌನ ಮಿತ್ರ, ಚಿರಂತನ
ಯೌವನಕೆ ನೆಚ್ಚಿದ


ಕ್ರೂರ ವಿಧಿಯ ರಕ್ಕಸ ನಗು
ಕಣ್ಣಿರು ನದಿಯಾಗಿ ಸಾಗರದ ಮಿಲನ


ಯಾಕೀ ಮಹಾಪಾತಕ
ಜೀವನ


ಅಗ್ನಿ ಕುಂಡದೊಳಗಿನ ಸೌಂದರ್ಯ
ಸಾವಿಗೆ ಸುಸ್ವಾಗತ


ಸಾವೇ ಕೊನೆಯಲ್ಲ
ಹೊಸಬಾಳ ಆರಂಭ


ಉದಯ ರವಿಯ
ಬದುಕು ಸಂಜೆಯ ಕನಸು.

ವಿಷಾದಗಳ ತಿರುವು


ಆಲೋಚನೆಗಳೆಲ್ಲವೂ

ಸತ್ತು ಹೋದವು

ಅಥವಾ

ಆತ್ಮಹತ್ಯೆಗೆ ಶರಣಾದವು

ಎಂತಹ ವಿಷಾದ.


ಒಬ್ಬಂಟಿಯಾದೆ, ಹಸಿರುಚಿಗುರಿದ

ಮರದಲ್ಲಿ ಒಣ ತರಗೆಲೆಯಂತೆ,

ಬಿರುಗಾಳಿಗೆ ಸಿಕ್ಕಿ

ಎತ್ತಲೋ ಹಾರಿ ಹೋದೆ

ಎಂತಹ ವಿಷಾದ.


ಹಲವಾರು ಧರ್ಮಗಳಿವೆ

ನೂರಾರು ಮಾರ್ಗವಿದೆ ಯಾತ್ರಿಗಳಿಗೋ

ಯಾನಕ್ಕೆ ರಥವೇ ಇಲ್ಲ

ರಥವಿದ್ದರೂ ಅದಕ್ಕೆ ಚಕ್ರವಿಲ್ಲ

ಎಂತಹ ವಿಷಾದ.


ಜಗವನೇ ಗೆದ್ದ ರಾಜ

'ಭೂ'ಪತಿ ನಾನೇ ಎಂದ

ಕೊನೆ ಘಳಿಗೆಯಲ್ಲಿ

ನೆನಪಾದದ್ದು ಅಲೆಕ್ಸಾಂಡರ್ ಮಾತ್ರ

ಎಂತಹ ವಿಷಾದ.


ಪ್ರಶ್ನೆ ಪ್ರಶ್ನೆಯಾಗೇ ಉಳಿಯಿತು,

ಉತ್ತರ ಹುಡುಕುವುದು ಕಷ್ಟವೇನಲ್ಲ

ಮತ್ತದೇ ಉದಾಸೀನ,

ನನ್ನಿಂದೇನೂ ಸಾಧಿಸಲು ಸಾಧ್ಯವಿಲ್ಲ

ಎಂತಹ ವಿಷಾದ.

About This Blog

  © Blogger template Valentine by Ourblogtemplates.com 2008

Back to TOP