ಬಡವ್ರು ನಾವು
ರೈತಾಪಿ ಜನ್ರು
ಕಾಣಾಕಿಲ್ಲ ನಮ್ ಬ್ಯೆವ್ರು
ರಕ್ತದ್ ಕಾರಂಜಿಗ್ಳವು,
ಯಾರ್ ಕಾಣ್ತಾರ್ ನಮ್
ಹಸಿದ್ ಹೊಟ್ಟೆ, ಹರಿದ್ ಬಟ್ಟಿ
ಮನ್ಸನ್ಗೆ ಕುಲ್ಡು ಬಡಿದೈತೆ
ಕಣ್ಗಲ್ಲ ಮನ್ಸಿಗೆ, ಹೃದಯಕ್ಕೆ...
ಝಣ ಝಣ ಮಣ ಮಣ
ಕೈಯಾಗ್ ಹ(ಹೆ)ಣ ಭಾರ, ಇಡಾಕ್
ಜಾಗಿಲ್ಲ, ಆದ್ರೂ ಅದ್ನೇ ಹಾಸ್ಗೆ
ಮಾಡ್ ಬಿದ್ಕಂತವೆ ಧನ ಪಿಶಾಚಿಗ್ಳು
ಜೊತಿಗ್ ಬೆತ್ಲೆ ಕುಣೀಕೆ ಲಲನಾಮಣೀರು
ಕುಡಿಯಾಕ್ ಎಣ್ಣೆ ಪಾನ್ಕ
ಕಡಿಯಾಕ್ ಕೊಕ್ಕೊಕ್ಕೋ ಮೋದ್ಕ
ನಿದ್ದೇನೇ ಕಾಣದ್ ರಾತ್ರಿಗ್ಳು
ಬಡವ್ರ್ಗೊಂತರಾ
ಸ್ರೀಮಂತರ್ಗೊಂತರಾ...
ತಾರತಮ್ಯದ್ ಬದ್ಕೇ
ನಮ್ ದ್ಯೇಸದ್ ಪ್ರಜಾಪ್ರಭುತ್ವ್
ಹ್ಞಾ.. ಭೂತ ಹೊಕ್ಕೈತೆ
ವಿಕೃತ ಮನಸಿನ್ಯಾಗಿನ ತಲಿಯೊಳಗೆ
ಭ್ರಷ್ಟಾಚಾರೀ ರಾಜ್ಕಾರಣಿಗ್ಳು, ಸರಕಾರಿ ಅಧಿಕಾರಿಗ್ಳು...
ಯಾವ್ ಮ್ಯೇಜಿನ್ ಕ್ಯೆಳ್ಗೆ ಅದೇನ್ ಚಾಚ್ಕಂತಿದಾರೋ
ಮಂಚದ್ ಮ್ಯಾಲೆ ಯಾರ್ ಜೊತಿಗ್ ಪಾಚ್ಕಂತಿದಾರೋ
ಯಾರಿಗ್ಗೊತ್ತು...!
4 ಪ್ರತಿಕ್ರಿಯೆ:
good one
simply great....v ppl tel farmers r t backbone of our country bt d bad part is dats nt right n here u hve showd the exact position of d farmers n our country....
It is heart touching.. I appreciate your work in presenting this..
It makes us to show some concern towards common poor people..
ಚೆನ್ನಾಗಿದೆ.
Post a Comment