Saturday, April 4, 2009

ಸುರಿವ ಒಲುಮೆಯಾ ಮಳೆಯೇ 'ಬರಾನ್'

'ಬರಾನ್'
ನಿರ್ದೇಶಕ: ಮಜೀದ್ ಮಜೀದಿ
ಭಾಷೆ: ಪರ್ಷಿಯನ್,
ದೇಶ: ಇರಾನ್
ಅವಧಿ: 94 ನಿಮಿಷ

ಸಾಮಾಜಿಕ ಕಟ್ಟುಪಾಡುಗಳ ಮಧ್ಯೆ ಚಿತ್ರಿತವಾದ ಒಂದು ಸುಂದರ ಪ್ರೇಮಕಾವ್ಯವೇ ಬರಾನ್. ಪರ್ಷಿಯನ್ ಭಾಷೆಯಲ್ಲಿ ಬರಾನ್ ಎಂದರೆ ಮಳೆ ಎಂಬ ಅರ್ಥ. ಆದ್ದರಿಂದ ಮಳೆ ಚಿತ್ರ ಇರಾನ್ನಲ್ಲಿ 2001ರಲ್ಲೇ ಬಿಡುಗಡೆಗೊಂಡಿದೆ. ಆದರೆ ಇದು ಎಂಗೇಜ್ಮೆಂಟ್ ಆಗಿರುವ ಹುಡುಗಿಯನ್ನು ಪ್ರೀತಿಸಿ, ಪ್ರೀತಿ ಮಧುರ ತ್ಯಾಗ ಅಮರ ಎಂದು ಸಂದೇಶ ಸಾರುವ ಚಿತ್ರವಂತೂ ಖಂಡಿತಾ ಅಲ್ಲ. ಇಲ್ಲಿ ಬರಾನ್ ನಾಯಕಿಯ ಹೆಸರು ಆಕೆಗೆ ಹಲವಾರು ಸಾಮಾಜಿಕ ಕಟ್ಟುಪಾಡುಗಳಿವೆ, ಅಷ್ಟೇ ಏಕೆ ಹೆಣ್ಣಿಗೆ ಇಲ್ಲಿ ಮಾತನಾಡುವ ಸ್ವಾತಂತ್ರ್ಯವೂ ಇಲ್ಲ. ವೈಚಾರಿಕ ದೃಷ್ಟಿಯಿಂದ ಚಿತ್ರ ನೋಡುಗನನ್ನು ಚಿಂತನೆಗೆ ಹಚ್ಚಿದರೆ ಭಾವನಾತ್ಮಕವಾಗಿ ಮನ ಮುಟ್ಟುತ್ತದೆ. ಇದರಲ್ಲಿ ಹದಿಹರೆಯದ ಮನಸುಗಳ ತಲ್ಲಣವಿದೆ, ಪ್ರತಿಯೊಬ್ಬರ ಮನದಲ್ಲೂ ಸ್ನೇಹಿತನಿದ್ದಾನೆ, ಅವರೆಲ್ಲರಲ್ಲೂ ಸಹಕಾರಿ ಮನೋಭಾವವಿದೆ. ದೃಶ್ಯದಾಳದಲ್ಲಿ ಆಧ್ಯಾತ್ಮಿಕ ಸೆಲೆಯೂ ಇದೆ. ಈ ಚಿತ್ರ ಹಲವಾರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

ರಷ್ಯಾದ ಕಡೆಯಿಂದ ಯುದ್ಧ ಮತ್ತು ತಾಲಿಬಾನರ ಬೆದರಿಕೆಯಿಂದ ಅತಂತ್ರರಾದ ಅಫಘಾನಿಸ್ತಾನ ಪ್ರಜೆಗಳು ಇರಾನ್ಗೆ ವಲಸೆ ಬಂದು ಅಲ್ಲಿನ ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಾ ತಮ್ಮ ಜೀವನದ ಬಂಡಿಯನ್ನು ಸಾಗಿಸಲು ಯಾವ ರೀತಿ ಹೆಣಗಾಡುತ್ತಿರುತ್ತಾರೆ ಎಂಬುದು ಚಿತ್ರದ ಮೂಲ ಕಥಾವಸ್ತು.ಅಫಘಾನಿಸ್ತಾನದ ನಿರಾಶ್ರಿತರು ಅಧಿಕೃತ ಗುರುತಿನ ಚೀಟಿಯಿಲ್ಲದೆ ನಿರಾಶ್ರಿತರ ಶಿಬಿರದಿಂದ ಹೊರಹೋಗಬಾರದೆಂಬ ನಿಯಮ ಅಲ್ಲಿನದ್ದು. ಆದರೆ ಬದುಕು ಸಾಗಿಸಲು ದುಡಿಮೆ ಅನಿವಾರ್ಯ ಇದರ ಲಾಭ ಪಡೆವ ಕಂಟ್ರ್ಯಾಕ್ಟರ್ಗಳು ಕಡಿಮೆ ಸಂಬಳಕ್ಕೆ ಈ ನಿರಾಶ್ರಿತರನ್ನು ದುಡಿಸಿಕೊಳ್ಳುತ್ತಾರೆ.

ಚಿತ್ರದಲ್ಲಿ ಮೆಮರ್ ಎಂಬ ಕಟ್ಟಡ ನಿರ್ಮಾಣ ಕಂಟ್ರ್ಯಾಕ್ಟರ್ ಕೈಕೆಳಗೆ ಕೆಲ ನಿರಾಶ್ರಿತರು ದುಡಿಯುತ್ತಿರುತ್ತಾರೆ. ಸ್ಥಳೀಯ ಯುವಕ ಲತೀಫ್ನನ್ನು ಆತನ ತಂದೆ ಕೆಲಸಕ್ಕೆಂದು ಮೆಮರ್ ಬಳಿ ಬಿಟ್ಟುಹೋಗಿರುತ್ತಾನೆ. ಚಿತ್ರದ ನಾಯಕ ಲತೀಫ್ ಕಟ್ಟಡದಲ್ಲಿ ಕೆಲಸ ಮಾಡುತ್ತಿರುವವರಿಗೆ ಚಾ, ಮಾಡಿಕೊಡುವ ಹಾಗೂ ಬ್ರೆಡ್ ಬನ್ಗಳನ್ನು ಅಂಗಡಿಯಿಂದ ತಂದುಕೊಡುವ ಆರಾಮದಾಯಕ ಕೆಲಸ ಮಾಡಿಕೊಂಡಿರುತ್ತಾನೆ. ಲತೀಫ್ ಬಿಸಿ ರಕ್ತದ ಯುವಕ ವಾಚಾಳಿ, ಒಂದರ್ಥದಲ್ಲಿ ಅಖಾಡಕ್ಕಿಳಿಸಿದ ಕೊಬ್ಬಿದ ಹುಂಜದಂತೆ, ಆದರೆ ದುಡ್ಡಿನ ವಿಷಯದಲ್ಲಿ ಮಾತ್ರ ಬಹಳ ನಾಜೂಕು ಪ್ರತಿಯೊಂದು ಪೈಸೆಯನ್ನೂ ಕೂಡಿಡುತ್ತಾನೆ. ದುಡ್ಡಿನ ವಿಷಯದಲ್ಲಿ ಮೆಮರ್ಗೆ ಈತನ ಮೇಲೆ ನಂಬಿಕೆಯಿಲ್ಲ ಎಲ್ಲಿ ಖರ್ಚು ಮಾಡಿಬಿಡುತ್ತಾನೋ ಎಂದು ಆತನ ವರ್ಷದ ಸಂಬಳವೆಲ್ಲವನ್ನೂ ತಾನೇ ಕೂಡಿಟ್ಟಿರುತ್ತಾನೆ.

ಆಫ್ಘನ್ ಪ್ರಜೆ ನಜಾಫ್ ಎಂಬಾತ ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು ಕಾಲು ಮುರಿದುಕೊಂಡಿರುತ್ತಾನೆ. ಕಾಲು ಮುರಿದುಕೊಂಡ ನಜಾಫ್ ತನ್ನ ಬದಲಿಗೆ ಮಗನನ್ನು ಸ್ನೇಹಿತನೊಡನೆ ಮೆಮರ್ ಬಳಿ ಕಳುಹಿಸುತ್ತಾನೆ. ಮಗ ರೆಹಮತ್ ತುಂಬಾ ಸಣಕಲು ವ್ಯಕ್ತಿ ಕ್ಲಿಷ್ಟಕರ ಕೆಲಸ ಆತನಿಂದ ಸಾಧ್ಯವಾಗುವುದಿಲ್ಲ ಆದ್ದರಿಂದ ಮೆಮರ್ ಆತನಿಗೆ ಅಡಿಗೆ ಮಾಡಿ ಮುಸುರೆ ತಿಕ್ಕುವ ಲತೀಫ್ನ ಕೆಲಸ ಕೊಡುತ್ತಾನೆ. ತನ್ನ ಆರಾಮದಾಯಕ ಕೆಲಸ ಕಿತ್ತುಕೊಂಡನಲ್ಲ ಎಂದು ಲತೀಫ್ಗೆ ಆತನ ಮೇಲೆ ಕೋಪವಿರುತ್ತದೆ, ಅಡಿಗೆ ಸಾಮಾನು ತರಲೆಂದು ಅಂಗಡಿಗೆ ಹೋಗುವಾಗ ಲತೀಫ್, ರೆಹಮತ್ ಕೆನ್ನೆಗೊಂದು ಬಲವಾಗಿ ಏಟು ಕೊಡುತ್ತಾನೆ ನಂತರ ಪದೇ ಪದೇ ತನ್ನ ಕುಚೇಷ್ಟೆಗಳಿಂದ ಒಂದಲ್ಲಾ ಒಂದು ರೀತಿಯಲ್ಲಿ ರೆಹಮತ್ಗೆ ಕಷ್ಟ ಕೊಡುತ್ತಿರುತ್ತಾನೆ.

ಇದೇ ಸಂದರ್ಭದಲ್ಲಿ ಲತೀಫ್ಗೊಂದು ಸತ್ಯ ತಿಳಿದುಬಿಡುತ್ತೆ. ರೆಹಮತ್ ಆಗಿ ಬಂದವನು ನಜಾಫ್ನ ಮಗ ಅಲ್ಲ ಮಗಳು ಬರಾನ್. ಕೆಲಸಕ್ಕಾಗಿ ವೇಷಮರೆಸಿಕೊಂಡಿದ್ದಾಳೆ ಎಂಬ ವಿಚಾರ ತಿಳಿದಂತಯೇ ಈತನ ಮನದಲ್ಲಿ ಏನೋ ಒಂದು ರೀತಿಯ ತಳಮಳ, ತಲ್ಲಣ. ಪ್ರೀತಿಯ ಭಾವನೆ, ಅನುಕಂಪದ ಸೆಲೆ ಎಲ್ಲವೂ ಒಟ್ಟಿಗೇ ಮೂಡಿ ಆಕೆಗೆ ಬೆಂಗಾವಲಾಗುತ್ತಾನೆ. ಯಾರೇ ಆಕೆಯೊಡನೆ ಜಗಳಕ್ಕೆ ನಿಂತರೂ ಈತ ಅವಳ ಪರವಾಗಿ ಜಗಳವಾಡುತ್ತಾನೆ.ಆದರೆ ಆಗಾಗ ಅಲ್ಲಿಗೆ ಚೆಕ್ಕಿಂಗ್ಗೆಂದು ಇರಾನ್ ಇನ್ಸ್ಪೆಕ್ಟರ್ಗಳು ಬರುತ್ತಿರುತ್ತಾರೆ, ರೆಹಮತ್ ಅವರಿಗೆ ಕಾಣಿಸುತ್ತಾನೆ ಆದರೆ ಲತೀಫ್ ರಹಮತ್ನನ್ನು ರಕ್ಷಿಸಿ ಜೈಲಿಗೆ ಹೋಗುತ್ತಾನೆ. ಆಫ್ಘನ್ ನಿರಾಶ್ರಿತರು ಕೆಲಸ ಮಾಡುವ ವಿಚಾರ ಇನ್ಸ್ಪೆಕ್ಟರ್ಗಳಿಗೆ ತಿಳಿದ ಕಾರಣ ಮೆಮರ್ ಎಲ್ಲ ಆಫ್ಘನ್ ಕೆಲಸಗಾರನ್ನು ಬಿಡಬೇಕಾಗಿ ಬರುತ್ತದೆ.

ಬರಾನ್ ಬೇರೆಲ್ಲೋ ಕೆಲಸಕ್ಕೆ ಸೇರಿದ್ದಾಳೆ ಎಂಬ ಸುದ್ದಿ ನಜಾಫ್ನ ಸ್ನೇಹಿತನಿಂದ ಲತೀಫ್ಗೆ ತಿಳಿಯುತ್ತೆ, ಈತ ಬರಾನ್ನನ್ನು ಹುಡುಕಿಕೊಂಡು ನಿರಾಶ್ರಿತರ ಶಿಬಿರದತ್ತ ಬರುತ್ತಾನೆ ಕೊನೆಗೂ ಆಕೆ ಕೆಲಸ ಮಾಡುವ ಜಾಗ ಕಂಡು ಹಿಡಿಯುತ್ತಾನೆ ಆಕೆಗೆ ಗೊತ್ತಾಗದಂತೆ ಕದ್ದು ಆಕೆಯನ್ನು ನೋಡುತ್ತಾನೆ ನದಿಯಿಂದ ಕಲ್ಲು ಹೊತ್ತು ಹಾಕುವ ಕೆಲಸದಲ್ಲಿ ಆಕೆ ಕಷ್ಟಪಡುವುದನ್ನು ಕಂಡು ಮರುಗುತ್ತಾನೆ. ನಜಾಫ್ಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಮೆಮರ್ಗೆ ಏನೋ ಸುಳ್ಳು ಹೇಳಿ ತನ್ನ ವರ್ಷದ ಸಂಬಳವನ್ನು ತಂದು ನಜಾಫ್ನ ಸ್ನೇಹಿತನಲ್ಲಿ ಕೊಟ್ಟು ನಜಾಫ್ಗೆ ಕೊಡುವಂತೆ ತಿಳಿಸುತ್ತಾನೆ ಆದರೆ ಆತ ಲತೀಫ್ಗೆ ಪತ್ರ ಬರೆದಿಟ್ಟು ಹಣದೊಡನೆ ಆಫ್ಘನ್ಗೆ ತೆರಳುತ್ತಾನೆ, ಕೊನೆಗೆ ಲತೀಫ್ ತನ್ನ ಗುರುತಿನ ಚೀಟಿ ಮಾರಿ ಹಣ ಪಡೆದು ನಜಾಫ್ಗೆ ಕೊಡುತ್ತಾನೆ.

ಅವರು ಹಣಪಡೆದ ಮರುದಿನವೇ ಅಫಘಾನಿಸ್ತಾನಕ್ಕೆ ತೆರಳುವುದೆಂದು ತೀರ್ಮಾನಿಸುತ್ತಾರೆ. ಬೆಳಗ್ಗೆ ಟ್ರಕ್ಗೆ ಸಾಮಾನು ಸರಂಜಾಮುಗಳನ್ನು ತುಂಬಿಸಲು ಲತೀಫ್ ನಜಾಫ್ಗೆ ಸಹಾಯ ಮಾಡುತ್ತಾನೆ, ಬರಾನ್ಗೆ ಆತನ ಸಹಕಾರಿ ಮನೋಭಾವ ಕಂಡು ಏನೋ ಒಂದು ರೀತಿಯ ಒಲುಮೆ. ಅದೊಂದು ಕೊನೆಯ ದೃಶ್ಯ ಬರಾನ್ ಟ್ರಕ್ ಹತ್ತಲು ಹೋಗುತ್ತಿರಬೇಕಾದರೆ ಕೆಸರಿನಲ್ಲಿ ಬೂಟು ಹೂತು ಹೋಗುತ್ತೆ ಲತೀಫ್ ಅದನ್ನು ಎತ್ತಿ ಆಕೆ ಕಾಲಿಗೆ ತೊಡಿಸುತ್ತಾನೆ ಆದರೆ ಬೂಟಿನ ಅಚ್ಚು ಕೆಸರಿನಲ್ಲಿ ಅಚ್ಚಾಗುತ್ತದೆ ಲತೀಫ್ ಮನದಲ್ಲಿ ಅದು ಅಚ್ಚಳಿಯದ ನೆನಪಾಗುತ್ತದೆ. ಕೊನೆಯಲ್ಲಿ ಬರಾನ್ (ಮಳೆ) ಬರುವುದರೊಂದಿಗೆ ಇವರ ಪ್ರೀತಿಗೆ ಸಾಕ್ಷಿಯಾಗುತ್ತಾಳೆ.

2 ಪ್ರತಿಕ್ರಿಯೆ:

prash April 5, 2009 at 7:38 AM  

Allayya pakkadalle idru mounamurthi aagirtiya...illi nodidare swantha kaalajiyinda Akshara Habba maadtaa idiya. ninna mouna ishtavaagittu, eega ninna barahada preetiyu...
vimarshe bidiyagide...matte ondishtu churukutana dakkisu adakke.
pakkadalliddu maattadade idru paravagilla bareyodu innu jaasti maadu. ninna abhiruchi khushi tandide. olledaagli mahesha :)

Unknown April 14, 2009 at 5:03 AM  

ಮಹೇಶ್‌,
ಬರಾನ್‌ ಬರಹ ಚೆನ್ನಾಗಿದೆ.
ಹೀಗೆ ಬರೀತಾನೇ ಇರಿ.
ಆಲ್ ದಿ ಬೆಸ್ಟ್‌

About This Blog

  © Blogger template Valentine by Ourblogtemplates.com 2008

Back to TOP